ಓ ಎನ್ನ ಸೋದರಿ !

ಓ ಎನ್ನ ಸೋದರಿ! ವೀರ ಭಾರತದ ನಾರಿ !
ಬಾ ಇಲ್ಲಿ ಹೊರಜಗಕೆ, ಶಾಂತಿ ಸಮತೆಯ ಎಡೆಗೆ
ಹೋಗುವಾ ನಾವೆಲ್ಲ ಗಗನ ಗಡಿಯ ಮೀರಿ
ಕರೆಯುತಿಹುದು ನೋಡಲ್ಲಿ ! ಬಾ ಭಾವಿನಾಡಿನೆಡೆಗೆ

ನಿನಗಂದರವರಾರು ಅಬಲೆ ನೀನಿರುವಿ ಎಂದು
ಅರಿಯಲಾರರೇ ಆದಿ ಅವತಾರ ಶಕ್ತಿ ಯಾರು ?
ಕೂರಸಿಗಳಾಟೋಪದಲಿ ಇದಿರಾದರಾರು ಅಂದು
ನಿನ್ನ ನೀ ತಿಳಿದು ಏಳು, ನಿನ್ನ ಆ ಹೃದಯವೆಮಗೆ ತೋರು

ಸಹನೆ ಸಹಕಾರ ಶಾಂತಿ ದೀಪ್ತಿಯ ಜ್ಯೋತಿ
ಹೃದಯ ತೈಲ ಹಾಕುತೆ ನಾಡದೀವಿಗೆ ಪ್ರಜ್ವಲಿಸಲಿ
ಎನ್ನ ಸೋದರಿ ನೀನು; ಕೂಡಿ ನಡೆ ಸುಮತಿ
ಭಾರತಾಂಬೆಯ ವೀರಮಕ್ಕಳ ಬಾಳು ಬೆಳಗಲಿ

ಮನೆಯ ಕೋಣೆಯ ಮರೆಯ ಸೆರೆಯಲ್ಲಿ !
ಒಲೆಯ ಮುಂದಣ ಝಳವೆ ನಿನ್ನದೋ ನೆಲೆಯು ?
ನಿನ್ನ ಕಲೆಯಲ್ಲಿ ಬಲಿಯಾಗಿಹುದೇನು ಅಲ್ಲಿ
ಓ ನಿಲ್ಲದಿರು ನಿಂತಲ್ಲಿ, ಕೇಳದೋ ಭಾರತಿಯ ಕರೆಯು !

ಮಿಂಚಿ ಮೇಲೇಳು; ನಿನ್ನ ಹೃದಯ ಹೇಳು
ನಿನ್ನೊಳಡಗಿದ ಸತ್ವ ಸತ್ಯದಾಗರವನರುಹು
ಮನವನಾವರಿಸಿಹ ಅಬಲತೆಯ ಶೀಳು
ನೀನಹುದು ಭಾವಿವಾಣಿಯ ನಾಂದಿ ಜೀವನ ಕುರುಹು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡಮ್ಮ
Next post ಎಂಕು ಪಣಂಬೂರಿಗೆ

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

cheap jordans|wholesale air max|wholesale jordans|wholesale jewelry|wholesale jerseys